Рет қаралды 97,999
ಹರೇ ಶ್ರೀನಿವಾಸ
ಸ್ತ್ರೀಯರು ಅರಿಶಿಣ ಕುಂಕುಮವನ್ನು ಎಲ್ಲೆಲ್ಲಿ ಹಚ್ಚಿಕೊಳ್ಳಬೇಕು? ಹೇಗೆ ಹಚ್ಚಿಕೊಳ್ಳಬೇಕು ?ಅರಿಶಿನ-ಕುಂಕುಮವನ್ನು ಹಚ್ಚಿಕೊಳ್ಳುವಾಗ ಯಾವ ಮಂತ್ರ ಹೇಳಬೇಕು?
ಗದ ಮತ್ತು ನಾರಾಯಣ ಮುದ್ರೆಯನ್ನು ಎಲ್ಲೆಲ್ಲಿ ಹೆಚ್ಚಿಕೊಳ್ಳಬೇಕು? ಹೇಗೆ ಹಚ್ಚಿಕೊಳ್ಳಬೇಕು ?ಯಾವ ಮಂತ್ರ ಹೇಳಬೇಕು?
ಎಂಬುದನ್ನು ತಿಳಿಯಲು ಈ ವಿಡಿಯೋವನ್ನು ನೋಡೋಣವೇ
* ಗದಿ ಹಚ್ಚಿಕೊಳ್ಳುವ ಮಂತ್ರ * ಅನಂತಾಸನ, ಶ್ವೇತ ದ್ವೀಪ, ವೈಕುಂಠ, ಇಂತಲ್ಲಿ ಇಲ್ಲದ ಗದಿ ಎಲ್ಲಿ ಇರೋದು ಅಂದರೆ ನಾರಾಯಣ ಕರದಲ್ಲಿ. ಆ ಗದೆ ಯನ್ನು ಮುತ್ತೈದೆಯರು ಹಚ್ಚಿಕೊಂಡರೆ ಮೂರು ಕೋಟಿ ಪುಣ್ಯ ಬರುವುದು. ವಿಪ್ರರು ಹಚ್ಚಿಕೊಂಡರೆ ವಿಪ್ರರು ಅಂದರೆ ಬ್ರಾಹ್ಮಣರು ವೇದ-ಪಾರಂಗತರು ಆಗುವರು. ಸನ್ಯಾಸಿಗಳು ಹಚ್ಚಿಕೊಂಡರೆ ಮೋಕ್ಷಕ್ಕೆ ಹೋಗುವರು. ಬಿಂದು ಮಾಧವನ ದರುಶನ ಕಾಶಿಗೆ ಹೋದಷ್ಟು ಪುಣ್ಯ ಹತ್ತದ ಪಾಪ ಹಾರತದ
ಇತಿಶ್ರೀ ಗದಿ ಮಂತ್ರ ಸಂಪೂರ್ಣಮ್ ಶ್ರೀಕೃಷ್ಣಾರ್ಪಣಮಸ್ತು
ಅರಿಶಿಣ ಹಚ್ಚಿಕೊಳ್ಳುವಾಗ ಹೇಳುವ ಮಂತ್ರ
ಹಳದಿ ಹಳದಿ ದರಿದ್ರನಾಶಿನಿ, ಸಂಪತ್ ಹಳದಿ, ಸೌಭಾಗ್ಯ ಹಳದಿ, ಬೆಟ್ಟದಷ್ಟು ಮುತ್ತೈದೆತನ ಕೂಟ್ಟು ಕಾಪಾಡಮ್ಮ. ಅಂತ ಕೇಳಿಕೊಳ್ಳಬೇಕು ಮತ್ತು ಇನ್ನೊಂದು ಮಂತ್ರ
* ಅರಿಶಿನ ಹಚ್ಚಿಕೊಳ್ಳುವಾಗ ಹೇಳಬೇಕಾದ ಮಂತ್ರ * :
ಹಳದಿ ಹರಿದ್ರಾ ದೇವಿ ಬ್ರಹ್ಮದಸ್ಯ ಮುಖ ಕಾಮಿನಿ. ಪುತ್ರ ಮಿತ್ರ ಅಭಿವೃದ್ಧಿ ರಸ್ತು ಸುಕಂತೋ
* ಕುಂಕುಮ ಹಚ್ಚಿಕೊಳ್ಳುವಾಗ
ಹೇಳುವ ಮಂತ್ರ *
ಊರ್ಧ್ವಪುಂಡ್ರಂ ಲಲಾಟೆಷು ಭರ್ತೂರಾಯುಷ್ಯ ವರ್ಧನಂ.
ಲಲಾಟೆ ಕುಂಕುಮಂ ಚೈವ ಸದಾ ಲಕ್ಷ್ಮಿ ನಿವಾಸಕಮ್.
ಮತ್ತೆ ಇನ್ನೊಂದು ಮಂತ್ರ
ರಮಾಮ್ ಅಪರ್ಣಾಮ್ ಸಾವಿತ್ರೀಮ್ ವೈದೇಹೀಮ್ ಅರುಂಧತಿಮ್ ಸೌಭಾಗ್ಯಾಯ ನಮಸ್ಕೃತ್ಯ ಕುಂಕುಮಂ ಧಾರಯಾಮ್ಯಹಂ ಎಂದು ಹೇಳಿ ಅರಿಶಿನ-ಕುಂಕುಮ ಹಚ್ಚಿಕೊಳ್ಳಬೇಕು