Рет қаралды 55,982
ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಮೇ 30 ರಂದು ರವಿಚಂದ್ರನ್ ತಮ್ಮ 61ನೇ ವಸಂತಕ್ಕೆ ಕಾಲಿಡಲಿದ್ದಾರೆ. ರವಿಚಂದ್ರನ್ ಅವರ ಕುರಿತಾಗಿ ‘ವಿಜಯ ಕರ್ನಾಟಕ ವೆಬ್’ ಪ್ರಾರಂಭಿಸಿರುವ ‘ಕನಸುಗಾರನ ಕಹಾನಿ’ ವಿಶೇಷ ಸರಣಿಯಲ್ಲಿ ನಟ, ನಿರ್ದೇಶಕ ಮೋಹನ್ ಮಾತನಾಡಿದ್ದಾರೆ.
‘’ರವಿಚಂದ್ರನ್ ಅವರಿಗೆ ಇರುವ ಹೆಸರಿನ ತಕ್ಕ ಹಾಗೆ ಅವರು ತುಂಬಾ ಕ್ರೇಜಿ. ರವಿಚಂದ್ರನ್ಗೆ ಇರುವ ಆ ಕ್ರೇಜಿ ಗುಣದಿಂದಲೇ ಅವರಿಗೆ ಕ್ರೇಜಿ ಸ್ಟಾರ್ ಅಂತ ಜನ ಬಿರುದು ಕೊಟ್ಟಿದ್ದಾರೆ. ಯಾವುದಕ್ಕೂ ಅವರು ಕಾಂಪ್ರೊಮೈಸ್ ಆಗುವುದಿಲ್ಲ. ‘ಏಕಾಂಗಿ’ ಸಿನಿಮಾ ಮೊದಲ ದಿನ ಸುಮಾರು ಎಂಬ ಅಭಿಪ್ರಾಯ ವ್ಯಕ್ತವಾದಾಗ ಮತ್ತೆ ರೀಶೂಟ್ ಮಾಡಿ, ರೀಎಡಿಟ್ ಮಾಡಿಸಿದರು. ಕೋಟ್ಯಾಂತರ ರೂಪಾಯಿ ಬಜೆಟ್ ಹಾಕಿರುವ ಸಿನಿಮಾದಲ್ಲಿ ಹೊಸ ಪ್ರಯೋಗ ಮಾಡಿದರು. ಇದಕ್ಕೆ ಅವರಿಗೆ ‘ಭಂಡ’ ಅಂತ ಹೇಳೋದು. ಅವರಿಗೆ ನಿಜಕ್ಕೂ ಡಬಲ್ ಗುಂಡಿಗೆ ಇದೆ’’
‘’ನನಗೆ ಸಿನಿಮಾ ಮೇಲೆ ಪ್ರೀತಿ, ಆಸಕ್ತಿ ಮೂಡುವುದಕ್ಕೆ ಕಾರಣ ರವಿಚಂದ್ರನ್. ಅವರಿಂದ ಸ್ಫೂರ್ತಿ ಪಡೆದು ನಾನು ಚಿತ್ರರಂಗಕ್ಕೆ ಬಂದೆ. ಪರೋಕ್ಷವಾಗಿ ಅವರ ಚಿತ್ರಗಳಿಂದಲೇ ನನ್ನ ಸಿನಿ ಪ್ರಯಾಣ ಆರಂಭವಾಯಿತು. ಈ ವಿಷಯ ರವಿಚಂದ್ರನ್ ಅವರಿಗೆ ಗೊತ್ತಿರಲಿಲ್ಲ’’ ಎಂದು ಸಂದರ್ಶನದಲ್ಲಿ ಮೋಹನ್ ಹೇಳಿದ್ದಾರೆ.
#CrazyStarRavichandran #Mohan #Kanasugara
Our Website : Vijaykarnataka.com
Facebook: / vijaykarnataka
Twitter: / vijaykarnataka