Рет қаралды 500,649
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮೊಂದಿಗೆ ಇಲ್ಲದಿರಬಹುದು. ಆದರೆ, ಅವರ ನೆನಪುಗಳು ಮಾತ್ರ ಶಾಶ್ವತವಾಗಿವೆ. ಪುನೀತ್ ರಾಜ್ಕುಮಾರ್ ಜೊತೆಗಿನ ನೆನಪುಗಳನ್ನ ಅವರ ಹಿರಿಯ ಸಹೋದರಿ ಲಕ್ಷ್ಮೀ ಗೋವಿಂದರಾಜ್ ‘ವಿಜಯ ಕರ್ನಾಟಕ ವೆಬ್’ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
‘’ಅಪ್ಪುಗೆ ಹುಷಾರಿಲ್ಲ ಅಂತ ವಿಷಯ ಬಂದಾಗ ಯಾರಿಗೆ ಫೋನ್ ಮಾಡೋದು ಅಂತ ಗೊತ್ತಾಗಲಿಲ್ಲ. ಅಶ್ವಿನಿಗೆ ಫೋನ್ ಮಾಡಿದರೆ, ಅವರು ತೆಗೆಯಲಿಲ್ಲ. ಆಮೇಲೆ ಮಂಗಳಾಗೆ ಫೋನ್ ಮಾಡಿದರೆ ‘’ಅಪ್ಪು ನಮ್ಮನ್ನೆಲ್ಲಾ ಬಿಟ್ಟು ಹೋಗ್ಬಿಟ್ಟ’’ ಅಂತ ಹೇಳಿದರು. ಆಗ ಮನಸ್ಸಿಗೆ ಬಹಳ ಕಷ್ಟ ಆಗಿತ್ತು. ಆಸ್ಪತ್ರೆಯಲ್ಲಿ ಅವನು ಮಲಗಿದ್ದ ನೋಡಿ ತುಂಬಾ ನೋವಾಯಿತು. ಇವತ್ತಿಗೂ ಅಪ್ಪು ಇಲ್ಲ ಅಂತ ನೆನೆಸಿಕೊಂಡರೆ ಹೊಟ್ಟೆಯಲ್ಲಿ ಸಹಿಸಲಾಗದ ನೋವು ಬಂದುಬಿಡುತ್ತೆ’’
‘’ಅಪ್ಪು ಬದಲು ನಮ್ಮನ್ನ ಯಾರನ್ನಾದರೂ ಕರ್ಕೊಂಡಿದ್ರೆ ಚೆನ್ನಾಗಿರುತ್ತಿತ್ತು. ಅಪ್ಪು ಇಲ್ಲದೆ ನಾವು ಇಷ್ಟು ಜನ ಕಾಲ ಕಳೆಯುತ್ತಿದ್ದೇವೆ ಅಂತ ಬೇಜಾರು ಆಗುತ್ತೆ’’ ಎಂದು ಹೇಳುತ್ತಾ ‘ವಿಜಯ ಕರ್ನಾಟಕ ವೆಬ್’ಗೆ ನೀಡಿರುವ ಸಂದರ್ಶನದಲ್ಲಿ ಲಕ್ಷ್ಮೀ ಗೋವಿಂದರಾಜ್ ಕಣ್ಣೀರು ಹಾಕಿದ್ದಾರೆ. ವಿಜಯ ಕರ್ನಾಟಕ ವೆಬ್ ಎಕ್ಸ್ಕ್ಲೂಸಿವ್ ಸಂದರ್ಶನ.
Lakshmi Rajkumar Exclusive Interview with Vijay Karnataka Online. Puneeth Rajkumar's sister shares the moments when Kannada actor Puneeth Rajkumar breathed his last on 28th October, 2021. She said, though Puneeth is not around, his memories are always unforgettable.
#puneethrajkumar #LakshmiRajkumarExclusiveInterview #PuneethPunyaSmarane
Our Website : Vijaykarnataka.com
Facebook: / vijaykarnataka
Twitter: / vijaykarnataka