Рет қаралды 111,023
ಹರೇ ಶ್ರೀನಿವಾಸ, ಭೂವರಾಹ ಸುಳಾದಿ ಹೇಳುವುದರಿಂದ ಭಗವಂತನು ಸ್ವಂತ ಮನೆ ಕರುಣಿಸುತ್ತಾನೆ.
ಸುಳಾದಿ
ತೋಡಿ, ಧ್ರುವತಾಳ!!
ಭೂವರಹ ಅವತಾರ ಶೃಂಗಾರ ಗುಣಾಕಾರ ದೇವರ ದೇವನೆ ಧಾರುಣಿಧರಾ ದಾನವರ ವಿಪಿನ ಕುಠಾರ ಕಲುಷಹರಾ | ಸ್ಥಾವರ ಜಂಗಮ ಜಠರದೊಳಗೆ ಯಿಟ್ಟ | ಶ್ರೀವರ ಸರ್ವಸಾರಭೂಕ್ತ ಶ್ರೀಮದಾನಂತ ಜೀವರಾಕಿಳರಿಗೆ ಬಲುಭಿನ್ನ ದಯಾಪಾರಾವಾರ ಮೂರುತಿ ಸುರಾ ನರೋರಗ ಪಾರಾವಾರ ವಿನುತಾ ವಿನುತಜ ಗಮನಾ ಕ್ಷೀರ ವಾರಿದೀ ಶಯನಾ ವಾರಿಜನಯನ ಇಃದೀವರ ಶ್ಯಾಮ ಶ್ರೀ ವಿಜಯವಿಠಲ ರೇಯಾ!
ತಾವರೆ ಜಲದೊಳಗಿದ್ದಂತನೊಳಗಿಪ್ಪಾ | ಭೂ ವರಹಾವತಾರಾ ॥೧॥
ಮಟ್ಟ ತಾಳ
ಸುರರನ ಬೆಂಬತ್ತಿ ಧರಣಿಯನು ಕಿತ್ತಿ ಸುರಳಿಯ ಮಾಡಿ ಸುತ್ತಿ | ಭರದಿಂದಲಿ ಎತ್ತಿ ಇರಿಸಿದ ದುರ್ಮತ್ತಿ | ಧರುణియ నిಜಪತ್ತಿ విజయిವಿಠ್ಠల ಮೂರ್ತಿ ಮೆರೆದನು ಸತ್ಕೀರ್ತಿ ಧರುಣಿಯ ನಿಜಪತ್ತಿ |೨||
ರೂಪಕ ತಾಳ
ಅಸುರ ಕನಕಾಕ್ಷನು ವಸುಧಿಯಾ ಎಳೆದೊಯ್ದು | ರಸಾತಳದೊಳಗೆ ಇರಿಸಿದಾನಂದೂ | ರಸಹೀನವಾಗೆ ವೀರಸರಾಗಿ ಪೋಗಿ ಸುಮ-| ನಸುರು ಚಿಂತೆಯಲಿ ಕಾಣಿಸದೆ ಪುಣ್ಯ ಬಿಸಜಭವನಡೆಗೆ ಅಸುರರಿಪುಗಳು ಪೋಗಿ ಪುಸಿಯಾದೆ ಭಿನ್ನೈಸೆ ವಸುದಿಯ ಸ್ಥಿತಿಯ ಪಶುಪತಿ ಪಿತ ತಿಳಿದು ವಿಜಯವಿಠಲರೇಯಗೆ ಹಸುಳೆಯಂದದಲಿ ಉಬ್ಬಸವ ಪೇಳಿದನು ೩||
ಝಂಪೆ ತಾಳ
ಸೂಕರ ರೂಪವತಾಳಿ ಕೋರಿದಾಡಿಲಿಂದ ಭೀಕರ ಶಬ್ದದಿ ದಶದಿಶೆಗಳಲ್ಲ ಬೀರುತ್ತ | ಭೂಕಂಪಿಸುವಂತೆ ಘುಡಿಘುಡಿಸಿ ಘೋಷವ | ಲೋಕೇಶಮುಖ್ಯರು ಸುರರೆಲ್ಲ ಸುಖಬಡಲು | ಶೋಕವಾಯಿತು ದೈತ್ಯಾವಳಿಗೆ ವೇದಗಳು | ವಾಕು ತೂದಲನುಡಿ ಗದಗದನೆ ಕೊಂಡಾಡೆ ವೈಕುಂಠಪತಿ ನಮ್ಮ ವಿಜಯವಿರಲನು ವಿ-1 ವೇಕರನೊಡಗೂಡಿ ನೂಕಿದನು ಬಲವಾ ||೪||
ತ್ರಿವಿಡಿ ತಾಳ
ಇಳಿಯಾ ಬಗೆದು ರಸಾತಳಕೆ ನಿಲ್ಲದೆ ಹೋಗಿ ಪೊಳೆವದಾಡಿಲಿಂದ ಖಳನ ಕುಕ್ಕಿರಿದೂ |
ಕೊಳಹಾಳ ವಬ್ಬಿಸಿ ನೆಲಕೆ ಅಪ್ಪಳಿಸಿ | ಬಲು ಬಲವಂತನಾದವನಾ | ಅಳಿದು ಆಕ್ಷಣದಲ್ಲಿ ನೆಲಕೆಕೆಡಹಿ | ನೆಲನಾ ಪಲುದುದಿಯಲಿ ಹೊತ್ತು ಕಿಲಿ | ಕಿಲಿ ನಗುತಾಲಿಪ್ಪ ಹಲವು ಮಾತಿಲಿ | ಜಲಜನಾಭನೆ ನಮ್ಮ ವಿಜಯವಿಠ್ಠಲರೇಯಾ ಓಲವ ಕಿಟಿ ದೇವಾನೆ ಇಳಿಯ ಭಾರಹರಣ 5
ಅಟ್ಟ ತಾಳ
ನಾರಾಯಣ ಕೃಷ್ಣ ಅಚ್ಚುತ ಗೋವಿಂದ | ನಾರದಾ ವರದ ಗೋವಿಂದಾನಂತ ಶೌರಿಮುರಾರಿ ಮುಕುಂದ ಸದಾನಂದಾ | ಶ್ರೀರಮಣನೆ ಜ್ಞಾನಪುಂಜಾನೆ ಕುಂಜರ-1 ದಾರುಣ ದೈತ್ಯಾರಿ ಕಾರುಣ್ಯ ಮೂರುತಿ - | ಈ ರೀತಿಯಲ್ಲಿ ಸ್ತೋತ್ರ ಧಾರುಣಿದೇವಿ ಅ~ ಪಾರವಾಗಿ ಮಾಡೇ ಮಾರಜನಕ ಹರಿ ವಿಜಯವಿಠಲರೇಯಾ |
ಗೀರವಾಣರ ಪ್ರತಿ ಸಾರವ ಹರಿಸಿದಾ ||೬||
ಆದಿ ತಾಳ
ದುಂದುಭಿ ಮೊರೆಯೆ, ಮೇಲೆ ಮಂದರ ಮೊಗ್ಗೆಗರಿಯೆ ಗಂಧರ್ವಾಧಿಗಳು ನಾರಂದ ತುಂಬರಾರು ನಿಂದು ವಂದಾಗಿ ಹಾಡುತ್ತ ನಂದಾದಿಂದ ನಲಿದಾಡೆ ಇಂದುವಿನೊಳು ಕಳಂಕಪೊಂದಿದಂತೆ ದಾಡೇತುದಿಗೆ ಸುಂದರ ವಸುಂಧರವು ಛಂದದಿಂದ ವೋಪ್ಪುತಿರೆ ಮಂದಾಕಿನಿಜನಕ ವಿಜಯವಿಠಲ ಉರ ಗೇಂದ್ರಗಿರಿಯಲ್ಲಿ ಬಂದುನಿಂದ ನಿಗಮಗೋಚರ ||೭||
ಸ್ವಾಮಿ ಪುಷ್ಕರಣಿಯವಾಸಿ ಕೋಡವೇಷಾ ಭೂಮಿರಮಣ ನಮ್ಮ ವಿಜಯವಿದ್ದಲ ತಿಮ್ಮಾ ||೮||
* * *