Рет қаралды 47,195
#GeethanjalisCooking #PoojaRoomRangoli #BHuVarahaswamyRangoli
ಭೂವರಾಹ ಸ್ತೋತ್ರ ಸುಳಾದಿ
======================
ಭೂವರಾಹ ಅವತಾರ ಶೃಂಗಾರ ಗುಣಾಕಾರಾ
ದೇವರ ದೇವನೆ ಧಾರುಣೀಧರ ದಾ-
ನವರ ವಿಪಿನ ಕುಠಾರ ಕಲುಷಹರಾ
ಸ್ಥಾವರ ಜಂಗಮ ಜಠರದೊಳಗೆ ಇಟ್ಟ
ಶ್ರೀವರ ಸರ್ವಸಾರಭೋಕ್ತ ಶ್ರೀಮದನಂತ
ಜೀವರಾಖಿಳರಿಗೆ ಬಲು ಭಿನ್ನ ದಯ ಪಾ-
ರಾವಾರ ಮೂರುತಿ ಸುರನರೋರಗ ಪಾ-
ರಾವಾರ ವಿನುತಾ ವಿನುತಜ ಗಮನಾ ಕ್ಷೀರ
ವಾರಿಧಿ ಶಯನಾ ವಾರಿಜನಯನಾ ಇಂ-
ದೀವರ ಶ್ಯಾಮ ಶ್ರೀ ವಿಜಯ ವಿಠ್ಠಲರೇಯಾ
ತಾವರೆ ಜಲದೊಳಗಿದ್ದಂತೆನ್ನೊಳಗಿಪ್ಪಾ
ಭೂವರಹಾವತಾರಾ ||1||
ಸುರರನು ಬೆಂಬುತ್ತಿ ಧರಣಿಯನು ಕಿತ್ತಿ
ಸುರುಳಿಯ ಮಾಡಿ ಸುತ್ತಿ
ಭರದಿಂದಲಿ ಎತ್ತಿ ಇರಿಸಿದ ದುರ್ಮತ್ತಿ
ಧರುಣಿಯ ನಿಜಪತ್ತಿ ವಿಜಯವಿಠ್ಠಲ ಮೂರ್ತಿ-
ಮೆರೆದನು ಸತ್ಕೀರ್ತಿ ಧರುಣಿಯ ನಿಜಪತ್ತಿ||2||
ಅಸುರ ಕನಕಾಕ್ಷನು ವಸುಧಿಯಾ ಎಳೆದೊಯ್ದು
ರಸಾತಳದೊಳಗೆ ಇರಿಸಿದನಂದೂ
ರಸಹೀನವಾಗೆ ವೀರಸರಾಗಿ ಪೋಗಿ, ಸುಮ-
ನಸರು ಚಿಂತೆಯಲಿ ಕಾಣಿಸದೆ ಪುಣ್ಯ-
ಬಿಸಜಭವನೆಡೆಗೆ ಅಸುರರಿಪುಗಳು ಪೋಗಿ
ಪುಸಿಯಾದೆ ಬಿನ್ನೈಸಿ ವಸುಧಿಯಾ ಸ್ಥಿತಿಯಾ
ಪಶುಪತಿ ಪಿತ ತಿಳಿದು ವಿಜಯ ವಿಠ್ಠಲರೇಯಗೆ
ಹಸುಳೆಯಂದದಲಿ ಉಬ್ಬಸವ ಪೇಳಿದನು||3||
ಸೂಕರ ರೂಪವತಾಳಿ ಕೋರಿದಾಡಿಲಿಂದ
ಭೀಕರ ಶಬ್ದದಿ ದಶದಿಶೆಗಳೆಲ್ಲ ಬೀರುತ್ತ
ಭೂಕಂಪಿಸುವಂತೆ ಘುಡಿಘಡಿಸೆ ಘೋಷವ
ಲೋಕೇಶ ಮುಖ್ಯರು ಸುರರೆಲ್ಲ ಸುಖಬಡಲು
ಶೋಕವಾಯಿತು ದೈತ್ಯಾವಳಿಗೆ ವೇದಗಳು
ವಾಕು ತೊದಲನುಡಿ ಗದಗದನೆ ಕೊಂಡಾಡೆ
ವೈಕುಂಠಪತಿ ನಮ್ಮ ವಿಜಯ ವಿಠ್ಠಲನು ವಿ
ವೇಕರನೊಡಗೂಡಿ ನೂಕಿದನು ಬಲವಾ ||4||
ಇಳಿಯಾ ಬಗಿದು ರಸಾತಳಕೆ ನಿಲ್ಲದೆ ಪೋಗಿ
ಪೊಳೆವ ದಾಡಿಲಿಂದ ಖಳನ ಕುಕ್ಕಿರಿದೊ
ಕೋಳಾಹಳವೆಬ್ಬಿಸಿ ನೆಲಕೆ ಅಪ್ಪಳಿಸಿ
ಬಲು ಬಲವಂತನಾದವನಾ
ಅಳಿದು ಅಕ್ಷಣದಲ್ಲಿ ನೆಲಕೆ ಕೆಡಹಿ
ನೆಲನಾ ಪಲುದುದಿಯಲಿ ಪೊತ್ತುಕಿಲಿ
ಕಿಲಿ ನಗುತಾಲಿಪ್ಪ ಹಲವು ಮಾತಿಲಿ
ಜಲಜನಾಭನೆ ನಮ್ಮ ವಿಜಯ ವಿಠ್ಠಲರೇಯಾ
ವೊಲವಕಿಟಿದೇವಾನೆ ಇಳಿಯ ಭಾರಹರಣಾ||5||
ನಾರಾಯಣ ಕೃಷ್ಣ ಅಚ್ಚುತ ಗೋವಿಂದ
ನಾರದ ವರದ, ಗೋವಿಂದಾನಂತಾ
ಶೌರಿ ಮುರಾರಿ ಮುಕುಂದ ಸದಾನಂದಾ
ಶ್ರೀ ರಮಣನೆ ಜ್ಞಾನಪುಂಜಾನೆ ಕುಂಜರ
ದಾರುಣ ದೈತ್ಯಾರಿ ಕಾರುಣ್ಯ ಮೂರುತಿ
ಈ ರೀತಿಯಲಿ ಸ್ತೋತ್ರ ಧಾರುಣಿದೇವಿ ಅ
ಪಾರವಾಗಿ ಮಾಡೆ ಮಾರಜನಕ
ಹರಿ ವಿಜಯ ವಿಠ್ಠಲರೇಯಾ
ಗೀರವಾಣರ ಪ್ರತಿ ಸಾರವ ಹರಿಸಿದಾ ||6||
ದುಂದುಭಿ ಮೊರೆಯೆ, ಮೇಲೆ ಮಂದರ ಮೊಗ್ಗೆಗರಿಯೆ
ಗಂಧರ್ವಾದಿಗಳು ನಾರಂದ ತುಂಬುರಾರು ನಿಂದು
ಛಂದಾಗಿ ಪಾಡುತ್ತ ನಂದಾದಿಂದ ನಲಿದಾಡೆ
ಇಂದುವಿನೊಳು ಕಳಂಕ ಪೊಂದಿದಂತೆ ದಾಡೆತುದಿಗೆ
ಸುಂದರ ವಸುಂಧರವು ಛಂದದಿಂದ ಒಪ್ಪುತಿರೆ
ಮಂದಾಕಿನಿಜನಕ ವಿಜಯ ವಿಠ್ಠಲ ಉರ
ಗೇಂದ್ರ ಗಿರಿಯಲ್ಲಿ ಬಂದು ನಿಂದ ನಿಗಮಗೋಚರ ||7||
ಜತೆ
ಸ್ವಾಮಿ ಪುಷ್ಕರಣಿಯವಾಸಿ ಕ್ರೋಡವೇಷಾ
ಭೂಮಿರಮಣ ನಮ್ಮ ವಿಜಯ ವಿಠ್ಠಲ ತಿಮ್ಮಾ ||