Рет қаралды 69,644
#ಮಂಗಳ_ಚಂಡಿಕಾ_ವೃತ
ಸ್ನೇಹಿತರೇ .. ಈ ವ್ರತ ಯಾವಾಗ ಬೇಕಾದರೂ ಯಾರ ಬೇಕಾದರೂ ಜಾತಿ ಮತ ಪಂತ ಭೇಧವಿಲ್ಲದೆ ಮಾಡಬಹುದು... ಈ ವ್ರತ ಯಾಕ ಮಾಡಬೇಕು ಎನು ಫಲವಿದೆ ಅಂದರೆ ಮಂಗಳ ವ್ರತ ಅಂದರೆ ಯಾರಿಗೆ ಮದುವೆಯ ವಿಷಯದಲ್ಲಿ ವಿಘ್ನ ಬರುತ್ತಿದೆಯೊ , ಮದುವೆ ವಿಳಂಬವಾಗುತ್ತಿದೆ (ಹೆಣ್ಣು ಮಕ್ಕಳು ಮತ್ತು ಗಂಡು ಹುಡುಗರು ಮದುವೆ )ಅವರು ಮತ್ತು ಯಾರಿಗೆ ಪದೆ ಪದೆ ವ್ಯವಹಾರ ದಲ್ಲಿ ನಷ್ಟ ಆಗುತ್ತಿದ್ದರೆ , ಎಷ್ಟು ಹುಡುಕಿದರೂ ಉದ್ಯೋಗ ಕ್ಕಾಗಿ ಪರದಾಡುವವರು , ಮಂಗಲಕಾರ್ಯದಲ್ಲಿ ವಿಘ್ನ ಬರುತ್ತಿದ್ದರೆ , ಎಲ್ಲವಿದ್ದೂ ಮನೆ ಕಟ್ಟೊಕೆ ಆಗುತ್ತಿಲ್ಲ ಅಂತ ನೊಂದುಕೊಳ್ಳುವವರು ಈ ವ್ರತವನ್ನು ಮಾಡಿ ಮಂಗಳ ಮಯ ಫಲ ಖಂಡಿತಾ ದೊರೆಯುತ್ತದೆ.... ಈ ವ್ರತ ನಾನು ಮಾಡಿದೆ ಅದಕ್ಕಾಗಿ ನಿಮಗೂ ಹೇಳಿ ಕೊಡುತ್ತಿದ್ದೇನೆ... ಈ ವ್ರತದ ಫಲ ಅನಂತವಾಗಿದೆ...ಇದು ನಾರದ ಮತ್ತು ನಾರಾಯಣ ಸಂವಾದದಲ್ಲಿ ಮಂಗಳೊಪಾಖ್ಯಾನದಲ್ಲಿ ಹೇಳಿದೆ
#ಮಾಡುವವಿಧಾನ
ನಲವತ್ತು ದಿನ ಮಾಡಬೇಕು ಈ ವ್ರತ .. ಮಂಗಳವಾರವೇ ಈ ವ್ರತ ಧಾರಣ ಮಾಡಬೇಕು . ಆದಿನ ಎಣ್ಣೆ ಸ್ಕಾನ ಮಾಡಿ ನಮ್ಮ ನಿತ್ಯದ ಪೂಜೆ ಜೊತೆಗೂ ಮಾಡಬಹುದು. ದೇವರ ಮನೆಯಲ್ಲಿ ಒಂದು ಕಡೆ ರಂಗವಲ್ಲಿ ಹಾಕಿ ಒಂದು ಸಣ್ಣ ತಟ್ಟೆಯಲ್ಲಿ , ದೇವರಿಗೆ ಉಪಯೋಗಿಸುವ ತಟ್ಟೆ ,ಅಥವಾ ಬಟ್ಟಲು ಎರಡು ಅರಿಶಿನ ಬೇರು (ಅರಿಷಿನ ಕೊಂಬು) ಇಟ್ಟು , ನೆನಪಿರಲಿ ಅರಿಷಿಣ ಬೇರುಗಳಿಗೆ ಕುಡಿ ಅಂದರೆ ಗಂಟಿರಬೇಕು ,ಅಮ್ಮ ಹೇಳುತ್ತಿದ್ದರು ಅದು ಮಕ್ಕಳ ಬೇರು ಅಂತ ಅಂದರೆ ಅದನ್ನ ಪೂಜಿಸಿದರೆ ವಂಶ ವೃದ್ಧಿಯಾಗುತ್ತೆ ಅಂತ, ಸಾಮಾನ್ಯವಾಗಿ ಅರಿಷಿಣಕ್ಕೆ ಹರಿದ್ರಾ ಅಂತ ಅಂದರೆ ದಾರಿದ್ರ್ಯವನ್ನು ದೂರಮಾಡುವ ದೇವಿ ಸನ್ನಿಧಾನ ಇರುತ್ತದೆ ಅಂತ . ನಾವು ಯಾವುದೇ ಕಾರ್ಯವನ್ನು ಮಾಡುವ ಮುನ್ನ ಅರಿಶಿನ ಕುಟ್ಟುವ ಶಾಸ್ತ್ರವನ್ನು ಮಾಡುತ್ತೇವೆ , ಮಂಗಳಕಾರ್ಯಗಳಲ್ಲಿ ಅರಿಶಿನ ನೀರು ಹಾಕುತ್ತೇವೆ , ವಧು ಅಕ್ಷತೆ ಸಮಯದಲ್ಲಿ ಅರಿಷಿಣ ಪತ್ತಲವನ್ನು ಉಡಬೇಕು ಅಂತ ಶಾಸ್ತ್ರದಲ್ಲಿದೆ . ಅಷ್ಟೊಂದು ಶ್ರೇಷ್ಠ ಅರಿಷಿಣ ಸಾಕ್ಷಾತ್ ದೇವಿ ಸನ್ನಿಧಾನ... ಅದಕ್ಕೆ ಈ ಬೇರುಗಳಲ್ಲಿ ಈಶ್ವರ ಸಹಿತ ಮಂಗಳ ಚಂಡಿಕೆಯನ್ನು ಆಹ್ವಾನ ಮಾಡಿ ನಂತರ ಸಂಕಲ್ಪ ಮಾಡಿ ನಿಮ್ಮ ಮನದ ಇಷ್ಟಾರ್ಥ ಎನು ಯಾವ ಉದ್ದೇಶಕ್ಕಾಗಿ ಈ ಪೂಜೆ ಮಾಡುತ್ತಿದ್ದೀರಾ ಅಂತ ಸಂಕಲ್ಪ ದೇಶ ಕಾಲ ನಕ್ಷತ್ರ ರಾಶಿ ಗೋತ್ರ ಹೇಳಿಕೊಂಡು .. ನಂತರ ಗಣೇಶ ನಿಗೆ ಕೈಮುಗಿದು ಗಣಪತಿ ಸ್ತೋತ್ರ ಹೇಳಿ ಶುರುಮಾಡಿ
ಆಹ್ವಾನಾರ್ಥೇ ಅಕ್ಷತಾಮ್ , ಆಸನಾರ್ಥೇ ಅಕ್ಷತಾಮ
ಹೂವಿನಿಂದ ಪಾದ , ಅರ್ಘ್ಯ , ಆಚಮನ , ಸ್ನಾನ , ಗೆಜ್ಜೆ ವಸ್ತ್ರ , ಗಂಧ , ಅಕ್ಷತೆ ಕೆಂಪುಹೂ , ಕನಕಾಂಬರ , ಏರಿಸಿ ಧೂಪ ದೀಪ ಮಾಡಿ , ಅನ್ನ ಪಾಯಸ ನೈವೇದ್ಯ ಮಾಡಿ , ಆರತಿ ಮಾಡಿ , ಮಂತ್ರಾಕ್ಷತೆ ಹಾಕಿ .....ನಂತರ ಮಂಗಳ ಚಂಡಿಕೆ ಸ್ತೋತ್ರ ಹನ್ನೊಂದು ಸಲ ಹೇಳಬೇಕು...
ಪ್ರತಿದಿನ ಪೂಜೆ ಇರಲ್ಲ ಮಂಗಳವಾರಕ್ಕೊಮ್ಮೆ ಮಾತ್ರ ಮಾಡಬೇಕು . ಅಂದರೆ ಒಟ್ಟು ಐದು ಮಂಗಳವಾರ ಪೂಜೆ ಆಗಬೇಕು.. ಶ್ಲೋಕದಲ್ಲಿ ಹೇಳಿದ ಹಾಗೆ ಐದು ಮಂಗಳವಾರದಲ್ಲಿ ಇಷ್ಟಾರ್ಥ ಗಳು ಸಿದ್ಧಿಸುತ್ತದೆ.. ಉಳಿದ ದಿನ ಅರಿಷಿಣ ಕುಂಕುಮ ಎರಿಸಿ ಹೂ ಏರಿಸಿ ತುಪ್ಪದ ದೀಪ ಹಚ್ಚಿ ಪ್ರತಿದಿನ ಹನ್ನೊಂದು ಸಲ ಈ ಮಂತ್ರ ಪಠಿಸಬೇಕು...ಆದರೆ ಪೂಜೆ ಮಾಡಿ ಇಟ್ಟದ್ದನ್ನ ನಾಲವತ್ತೊಂಬತ್ತನೇ ದಿನವೇ ತೆಗೆಯಬೇಕು , ಒಂದು ಸಲ ಪೂಜೆ ಮಾಡಿದ ಮೇಲೆ ಆ ಜಾಗದಿಂದ ಕದಲಿಸಬಾರದು....✍️ Veena joshi
#ಮಂಗಳಚಂಡಿಕೆಸ್ತೋತ್ರ
ರಕ್ಷ ಜಗನ್ಮಾತಾ ದೇವೀ ಮಂಗಳಚಂಡಿಕೇ ।
ಹರಿಕೇ ವಿಪದಾಂ ರಾಶೋ ಹರ್ಷಮಂಗಳಕಾರಿಕೇ ॥
ಹರ್ಷಮಂಗಳದಕ್ಷೇ ಚ ಹರ್ಷಮಂಗಳ ದಾಯಿಕೇ ।
ಶುಭೇ ಮಂಗಳದಕ್ಷೇ ಚ ಶುಭಮಂಗಳಚಂಡಿಕೇ ॥
ಮಂಗಳೇ ಮಂಗಳಾರ್ಹೇ ಚ ಸರ್ವಮಂಗಳಮಂಗಳೇ
ಸದಾ ಮಂಗಳೆ ದೇವಿ ಸರ್ವೇಷಾಂ ಮಂಗಳಾಲಯೇ ॥
ಪೂಜ್ಯೇ ಮಂಗಳವಾರೇ ಚ ಮಂಗಲಾಭೀಷ್ಟ ದೇವತೇ ।
ಪೂಜ್ಯೇ ಮಂಗಳ ಭೂಪಸ್ಯ ಮನುವಂಶಸ್ಯ ಸಂತತಮ್ ॥
ಮಂಗಲಳಾದೀ ಶಾಂತಿದೇವಿ ಮಂಗಲಾನಾಂ ಚ ಮಂಗಳೇ ।
ಸಂಸಾರ ಮಂಗಳಾಧಾರೇ ಮೋಕ್ಷಮಂಗಳದಾಯಿನಿ ॥
ಸಾರೇ ಚ ಮಂಗಲಾಧಾರೇ ಪಾರೇಚ ಸರ್ವಕರ್ಮಣಾಮ್ ।
ಪ್ರತಿಮಂಗಳವಾರೇ ಚ ಪೂಜ್ಯೇ ಮಂಗಸುಖಪ್ರದೇ ॥
ಪ್ರಥಮೇ ಪೂಜಿತಾ ದೇವೀ ಶಂಭೂನಾ ಸರ್ವಮಂಗಲಾ ।
ದ್ವಿತಿಯೇ ಪೂಜಿತಾ ದೇವೀ ಮಂಗಲೇನ ಗ್ರಹೇಣ ಚ ॥
ತೃತಿಯೇ ಪೂಜಿತಾ ಭದ್ರಾ ಮಂಗಲೇನ ನೃಪೇಣ ಚ ।
ಚತುರ್ಥೇ ಮಂಗಲೇ ವಾರೇ ಸುಂದರೀಭಿಶ್ಚ ಪೂಜಿತಾ ।
ಪಂಚಮೇ ಮಂಗಲಾಕಾಂಕ್ಷೈರ್ನರೈರ್ಮಂಗಲಚಂಡಿಕಾ ll
॥ ಇತಿ ಶ್ರೀ ಬ್ರಹ್ಮವೈವರ್ತೇ ದ್ವಿತೀಯೇ ಪ್ರಕೃತಿಖಂಡೇ
ನಾರದ ನಾರಾಯಣಸಂವಾದೇ ಮಂಗಲೋಪಾಖ್ಯಾನೇ
ಮಂಗಲಚಂಡಿಕಾ ಸ್ತೋತ್ರಂ ಸಮ್ಪೂರ್ಣಮ್ ॥